ನಾಳೆಯಿಂದ‘ಬಾಂಬೆ ಮಿಠಾಯಿ’
Posted date: 14 Thu, May 2015 – 07:06:07 PM

ಟಚ್ ವುಡ್ ಕ್ರಿಯೇಷನ್ ಅಡಿಯಲ್ಲಿ ಸೌದ ಶರಿಫ್ ಹಾಗೂ ಅಮೀರ್ ಶರಿಫ್ ನಿರ್ಮಾಣದ ‘ಬಾಂಬೆ ಮಿಠಾಯಿ’ ಚಂದ್ರಮೋಹನ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಚಿತ್ರ,  ಮೈಸೂರು, ಮಡಿಕೇರಿ, ಕುಶಾಲನಗರ, ಗೋಲ್ಡನ್ ಟೆಂಪಲ್, ಚಿಕ್ಕಮಗಳೂರು, ಕುದುರೆಮುಖ, ಕಳಸ ದೇವಸ್ಥಾನ, ಬಿಡಾಡಿ, ಮುರುಡೇಶ್ವರ, ಕಾರವಾರ, ಹುಬ್ಬಳ್ಳಿ, ಗದಗ್, ರಾಣಿ ಬೆನ್ನೂರ್, ಚಿತ್ರದುರ್ಗ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದೆ. ‘ಬಾಂಬೆಮಿಠಾಯಿ’ ಚಂಚಲ ಮನಸ್ಸಿನ ಯುವಕನ ಸುತ್ತ ಹೆಣೆಯಲಾದ ಚಿತ್ರ.

ಬಾಂಬೆ ಮಿಠಾಯಿ’ ಸಿನೆಮಾದಲ್ಲಿ ಮೂವರು ಸಂಗೀತ ನಿರ್ದೇಶಕರ ಸಂಗಮ ಕೂಡ ಆಗಿದೆ ? ಸಿನೆಮಾದ ಸಂಗೀತ ನಿರ್ದೇಶಕರು ವೀರ ಸಮರ್ಥ, ಸಿನೆಮಕ್ಕೆ ಹಾಡು ಹೇಳಿರುವ ಸಂಗೀತ ನಿರ್ದೇಶಕರು ಗುರುಕಿರಣ್ ಹಾಗೂ ಹಾಡನ್ನು ಬರೆದಿರುವವರು ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸಹ ಸಂಗೀತ ನಿರ್ದೇಶಕರು.
 
 
ನಿರಂಜನ್ ದೇಶ್ಪಾಂಡೆ, ದಿಶಾ ಪಾಂಡೆ ಜೊತೆಗೆ ಪೋಷಕ ವರ್ಗದಲ್ಲಿ ಆರ್ ಜೆ ರೋಹಿತ್, ವಿಕ್ರಮ್, ಚಿಕ್ಕಣ್ಣ, ಕಿಶೋರಿ ಬಲ್ಲಾಳ್, ಸುನಿಲ್, ಬುಲ್ಲೆಟ್ ಪ್ರಕಾಷ್, ಮೈಕಲ್ ಮಧು, ಮೂಗು ಸುರೇಶ್, ನಲ್ಲೂರ್ ನಾರಾಯಣ್, ಬೇಬೀ ಬಿಂದುಶ್ರೀ ಇದ್ದಾರೆ.
 
ನಲ್ಲೂರ್ ನಾರಾಯಣ್ ಅವರು ಕಾರ್ಯನಿರ್ವಾಹಕ ನಿರ್ಮಾಪಕರು. ವೀರ್ ಸಮರ್ಥ ಅವರ ಸಂಗೀತ, ಆರ್ ಕೆ ಶಿವಕುಮಾರ್ ಅವರ ಛಾಯಾಗ್ರಹಣ, ಹರ್ಷ, ರಘು, ಕಲೈ ಅವರ ನೃತ್ಯ ನಿರ್ದೇಶನ, ವಿ ನಾಗೇಂದ್ರ ಪ್ರಸಾದ್, ನವೀನ್ ಕುಮಾರ್ ಹಾಗೂ ಹೃದಯ ಶಿವ ಅವರ ಸಾಹಿತ್ಯ ಈ ಚಿತ್ರಕ್ಕೆ ಇದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed